1. ಕನಸಿನಲ್ಲಿ ಏಣಿಯನ್ನು ಕಂಡವರು ಯಾರು?
2. ತನ್ನ ಕನಸಿನಲ್ಲಿ ಸೂರ್ಯ, ಚಂದ್ರ ಮತ್ತು 11 ನಕ್ಷತ್ರಗಳು ತನಗೆ ಅಡ್ಡ ಬೀಳುವದನ್ನು ಕಂಡವರು ಯಾರು?
3. ಸೆರೆಮನೆಯಲ್ಲಿ ಯೋಸೇಫನು ಮುಖ್ಯ ಪಾನದಾಯಕನ ಮತ್ತು ಮುಖ್ಯ ಭಕ್ಷ್ಯಕಾರನ ಸ್ವಪ್ನಗಳ ಅರ್ಥವನ್ನು ತಿಳಿಸಿದನು. ಇವರಿಬ್ಬರಲ್ಲಿ ಯಾರಿಗೆ ಬಿಡುಗಡೆಯಾಯಿತು ಮತ್ತು ಯಾರು ಗಲ್ಲಿಗೇರಿಸಲ್ಪಟ್ಟನು?
4. ತನಗೆ ಬಿದ್ದ ಎರಡು ಸ್ವಪ್ನಗಳ ಅರ್ಥವನ್ನು ತಿಳಿಸಬೇಕೆಂದು ಪರೋಹನು ಯೋಸೇಫನನ್ನು ಕೇಳಿಕೊಂಡನು. ಆ ಎರಡು ಸ್ವಪ್ನಗಳು ಯಾವವು?
5. ದೇವರು ಸ್ವಪ್ನದಲ್ಲಿ ಒಬ್ಬ ಯುವಕಣಿಗೆ ಕಾಣಿಸಿಕೊಂಡು “ನಿನಗೆ ಯಾವ ವರ ಬೇಕು ಕೇಳಿಕೋ” ಎಂದು ಹೇಳಿದನು. ಆ ಯುವಕನು ಯಾರು?
6. ಒಬ್ಬ ರಾಜನು ಕನಸ್ಸನ್ನು ಕಂಡು ಅದನ್ನು ಮರೆತು ಬಿಟ್ಟನು. ದಾನಿಯೇಲನು ಅದರ ಅರ್ಥ ತಿಳಿಸಿದನು. ಆ ರಾಜನ ಹೆಸರೇನು?
7. ಮದುವೆ ಮಾಡಿಕೋ ಎಂದು ದೇವದೂತನು ಕನಸಿನಲ್ಲಿ ಯಾರಿಗೆ ಹೇಳಿದನು? (ಹೊಸ ಒಡಂಬಡಿಕೆಯಲ್ಲಿ)
8. ಕನಸನ್ನು ಕಂಡ ಮೇಲೆ ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಯಾರು ಹೊರಟು ಹೋದರು?
9. ಒಬ್ಬ ದೇಶಾಧಿಪತಿಯ ಹೆಂಡತಿ ತನ್ನ ಗಂಡನಿಗೆ “ನಾನು ಕನಸಿನಲ್ಲಿ ಆತನ ದೆಸೆಯಿಂದ ಬಹಳ ತೊಂದರೆ ಪಟ್ಟೆನು. ಆ ಸತ್ಪುರುಷನ ಗೊಡವೆಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದರು. ಆ ಅಧಿಕಾರಿ ಯಾರು?
10. ಪ್ರತಿ ಸಾರಿ ಕನಸು ಕಂಡಾಗ ಕಳವಳ ಪಡುತ್ತಿದ್ದ ರಾಜನು ಯಾರು?
Result: