1. ಪಾರಿವಾಳದಂತೆ ನಿಷ್ಕಪಟವಾಗಿಯು, ಸರ್ಪದಂತೆ ಜಾಣರಾಗಿಯೂ ಇರಬೇಕೆಂದು ಹೇಳಿದವರಾರು?
2. ಸಮುದ್ರದ ತೀರದಲ್ಲಿ ಬೆಳಗಿನ ಊಟಕ್ಕೆ ಯಾರು ಮೀನನ್ನು ಸಿದ್ಧಪಡಿಸಿದರು?
3. ಸೈತಾನನು ದೇವರ ವಾಕ್ಯವನ್ನು ಹೇಳಿದ ಒಂದು ಉದಾಹರಣೆಯನ್ನು ಕೊಡಿರಿ.
4. ಯೇಸುವನ್ನು ಯಾರ ಸಮಾಧಿಯಲ್ಲಿ ಹೂಣಿಟ್ಟರು?
5. ಯೇಸುವನ್ನು ಸತ್ತುಹೋದ ಸ್ನಾನಿಕನಾದ ಯೋಹಾನನೆಂದು ಯಾರು ಅಂದುಕೊಂಡರು?
6. ಯೇಸು ತನ್ನ ಮೊದಲನೆಯ ಅದ್ಭುತ ಕಾರ್ಯವನ್ನು ಎಲ್ಲಿ ಮಾಡಿದನು?
7. ಯೇಸು ಯಾರ ವಿಷಯದಲ್ಲಿ “ಇಗೋ ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ” ಈ ಮಾತನ್ನು ಹೇಳಿದನು?
8. “ನನಗೆ ಕುಡಿಯಲು ನೀರನ್ನು ಕೊಡು” ಎಂದು ಯೇಸು ಯಾರನ್ನು ಕೇಳಿದನು
9. ಪುನರುತ್ಥಾನವಾದ ಮೇಲೆ ಯೇಸು ಎಷ್ಟು ದಿನಗಳ ವರೆಗೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡನು?
10. ಯೇಸುವಿನ ಕಡೆ ಆಜ್ಞೆಯನ್ನು ಏನೆಂದು ಕರೆಯುತ್ತಾರೆ?
Result: