1. ನಾಲಿಗೆಗ ಕಡಿವಾಣ ಹಾಕಬೇಕೆಂದು ಹೊಸ ಒಡಂಬಡಿಕೆಯಲ್ಲಿರುವ ಯಾವ ಪುಸ್ತಕದಲ್ಲಿ ಬರೆದಿದೆ?
2. ಹಳೆಯ ಒಡಂಬಡಿಕೆಯಲ್ಲಿ ಯಾವ ಮಹಾಪುರುಷನು, “ನಾನು ವಾಕ್ಚಾತುರ್ಯವಿಲ್ಲದವನು, ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು?
3. ಹೊಸ ಒಡಂಬಡಿಕೆಯಲ್ಲಿ ಯಾವ ಯಾಜಕನು ದೇವದೂತನು ಹೇಳಿದ ಮಾತನ್ನು ನಂಬದೇ ಹೋದದ್ದರಿಂದ ಸ್ವಲ್ಪ ದಿನದ ವರೆಗೆ ಮೂಕನಾಗಿ ಮಾತನಾಡಲಾರದೇ ಹೋದನು?
4. ಅಪೋಸ್ತಲರ ಮೇಲೆ ಪವಿತ್ರಾತ್ಮನು ಉರಿಯಂತಿದ್ದ ನಾಲಿಗೆಗಳ ಹಾಗೆ ಅವರ ಮೇಲೆ ಒಂದೊಂದಾಗಿ ಯಾವ ದಿನದಲ್ಲಿ ಕೂತುಕೊಂಡವು?
5. ತೊದಲು ಮಾತಾಡುತ್ತಿದ್ದ ಒಬ್ಬ ಕಿವುಡನ ನಾಲಿಗೆಯನ್ನು ಮುಟ್ಟಿ ಗುಣಪಡಿಸಿದವರು ಯಾರು?
6. ದೇವರು ಮನುಷ್ಯರ ಭಾಷೆಯನ್ನು ಎಲ್ಲಿ ತಾರುಮಾರು ಮಾಡಿದನು?
7. “ಅವನು ತನ್ನ ತುದಿ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ” ಎಂದು ಯಾರು ಯಾರಿಗೆ ಕೇಳಿಕೊಂಡರು?
8. ಜ್ಞಾನೋಕ್ತಿಗಳ ಪುಸ್ತಕದಲ್ಲಿ ಶಿಷ್ಟರ ನಾಲಿಗೆಯನ್ನು ಯಾವದಕ್ಕೆ ಹೋಲಿಸಿದೆ?
9. ಈ ವಾಕ್ಯವನ್ನು ಪೂರ್ತಿಗೊಳಿಸಿರಿ: “ಮತಿವಂತರ ಮಾತೇ___________”
10. ಕೀರ್ತನೆ 140 ರಲ್ಲಿ ದುಷ್ಟರ ನಾಲಿಗೆಯನ್ನು ಯಾವದಕ್ಕೆ ಹೋಲಿಸಿದ್ದಾರೆ?
Result: