Bible Quiz in Kannada Topic wise: 92 || ಕನ್ನಡ ಬೈಬಲ್ ಕ್ವಿಜ್ (ಸೇವಕರು)

1. ಪ್ರವಾದಿಯಾದ ಎಲೀಷನ ಸೇವಕನು ಯಾರು?
A. ಗೆಹಾಜಿ
B. ಗಿದ್ಯೋನ್
C. ಗೆಮಾರ್
D. ಎಲೀಯನು
2. ಸಿರಿಯ ದೇಶದ ಸೇನಾಪತಿಯು ತನ್ನ ಮನೆಯಲ್ಲಿದ್ದ ಚಿಕ್ಕ ಬಾಲಕಿಯ (ಗುಲಾಮಳು) ಮಾತನ್ನು ಕೇಳಿ ತನ್ನ ಕುಷ್ಠರೋಗದಿಂದ ವಾಸಿಯಾದನು. ಆ ಸೇನಾಪತಿ ಯಾರು?
A. ನತಾನಯೇಲನು
B. ನೆಬುಕ್ನೇಚ್ಚರನು
C. ನಾಮಾನನು
D. ನಿಕೋದೋಮನು
3. ಅಬ್ರಹಾಮನು ತನ್ನ ಮಗನಾದ ಇಸಾಕನಿಗಾಗಿ ಹೆಣ್ಣು ತರಲು ಯಾರನ್ನು ಕಳಿಸಿದನು?
A. ಎಲೀಯೇಜರನು
B. ಎಲೀಯನು
C. ಎಲೀಷನು
D. ಎಲ್ಕಾನನು
4. ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎಂದು ತನ್ನ ತಂ ದೆಯನ್ನು ಕೇಳಿದ್ದು ಯಾರು?
A. ಮೋಸದ ಮಗನು
B. ಕಳ್ಳನಾದ ಮಗನು
C. ಕೊಲೆಮಾಡಿದ ಮಗನು
D. ತಪ್ಪಿಹೋದ ಮಗನು
5. ಯಜಮಾನನು ಮತ್ತು ದ್ರಾಕ್ಷೆಯ ತೋಟದ ಸಾಮ್ಯದಲ್ಲಿ ಆ ಯಜಮಾನನು ಹಣ್ಣುಗಳನ್ನು ತರಲು ಒಕ್ಕಲಿಗರ ಬಳಿಗೆ ಯಾರನ್ನು ಕಳಿಸಿದನು?
A. ಸ್ನೇಹಿತರನ್ನು
B. ಮಗನನ್ನು
C. ಆಳುಗಳನ್ನು
D. ನ್ಯಾಯಾಧಿಪತಿಗಳನ್ನು
6. “ದಾಸನ ರೂಪವನ್ನು ಧರಿಸಿಕೊಂಡವನು” ಎಂದು ಪೌಲನು ಯಾರ ವಿಷಯವಾಗಿ ಬರೆದಿದ್ದಾನೆ?
A. ಯಾಕೋಬ
B. ಯೋನ
C. ಯೋಸೇಫ
D. ಯೇಸು
7. ನೈಲ್ ನದಿಯಲ್ಲಿ ತೇಲಾಡುತ್ತಿದ್ದ ಮಗುವನ್ನು ತನ್ನ ಬಳಿಗೆ ತರಲು ರಾಜಕುಮಾರಿಯು ಯಾರನ್ನು ಕಳಿಸಿದಳು?
A. ದಾಸಿಯನ್ನು
B. ದಾಸನನ್ನು
C. ದಾವೀದನನ್ನು
D. ದೊರ್ಕಳನ್ನು
8. ತಲಾಂತುಗಳ ಸಾಮ್ಯದಲ್ಲಿ ಧಣಿಯು, “ಭಲಾ ನಂಬಿಗಸ್ತನಾದ ಒಳ್ಳೇ ಆಳು ನೀನು” ಎಂದು ಯಾರಿಗೆ ಹೇಳಿದನು?
A. ಇಬ್ಬರು ಆಳುಗಳು-10 ತಲಾಂತುಗಳು ಮತ್ತು 7 ತಲಾಂತುಗಳು ಇದ್ದವರು
B. ಇಬ್ಬರು ಆಳುಗಳು-6 ತಲಾಂತುಗಳು ಮತ್ತು 2 ತಲಾಂತುಗಳು ಇದ್ದವರು
C. ಇಬ್ಬರು ಆಳುಗಳು-9 ತಲಾಂತುಗಳು ಮತ್ತು 7 ತಲಾಂತುಗಳು ಇದ್ದವರು
D. ಇಬ್ಬರು ಆಳುಗಳು-5 ತಲಾಂತುಗಳು ಮತ್ತು 2 ತಲಾಂತುಗಳು ಇದ್ದವರು
9. ತನ್ನ ಆಳನ್ನು ಸ್ವಸ್ಥ ಪಡಿಸಬೇಕೆಂದು ಯಾವ ರೋಮನ್ ಅಧಿಕಾರಿಯು ಯೇಸುವನ್ನು ಕೇಳಿಕೊಂಡನು?
A. ಯಾಯೀರ
B. ಶತಾಧಿಪತಿ
C. ಪಿಲಾತನು
D. ನಿಕೋದೋಮನು
10. ಓಡಿಹೋದ ಗುಲಾಮನನ್ನು ಕ್ಷಮಿಸಿ ತಿರುಗಿ ತನ್ನ ಬಳಿಗೆ ಕರೆದುಕೊಂಡು ಕ್ರೈಸ್ತ ಸಹೋದರನಂತೆ ನೋಡಿಕೊಳ್ಳಬೇಕೆಂದು ಶ್ರೀ ಪೌಲನು ಯಾರಿಗೆ ಕಾಗದ ಬರೆದನು?
A. ಕಾಯಫನು
B. ಪಿಲಾತನು
C. ಫಿಲೆಮೋನನು
D. ಪೌಲನು
Result: