1. ನಾಮಾನನ ಕುಷ್ಠ ರೋಗವನ್ನು ವಾಸಿ ಮಾಡಿದವರು ಯಾರು?
2. ಯಾವ ನಾಯಕತ್ವದಲ್ಲಿ ಯೆರಿಕೋವನ್ನು ಆಶ್ಚರ್ಯಕರವಾದ ರೀತಿಯಲ್ಲಿ ವಶಪಡಿಸಿಕೊಳ್ಳಲಾಯಿತು?
3. ಕಲ್ಲಿನೊಳಗಿಂದ (ಬಂಡೆ) ನೀರು ಬರುವಂತೆ ಮಾಡಿದ್ದು ಯಾರು?
4. ದೋರ್ಕಳನ್ನು ಸತ್ತವರೊಳಗಿಂದ ಯಾರು ಎಬ್ಬಿಸಿದರು?
5. ಕರಡಿಗಳು ಹಾಸ್ಯ ಮಾಡುತ್ತಿದ್ದ ಮಕ್ಕಳನ್ನು ಹರಿದುಹಾಕುವಂತೆ ಶಪಿಸಿದವರು ಯಾರು?
6. ಸೂರ್ಯಚಂದ್ರರು ನಿಲ್ಲುವಂತೆ ಯಾರು ಆಜ್ಞಾಪಿಸಿದರು?
7. ಯಾಯಿರನ ಮಗಳನ್ನು ಸತ್ತವರೊಳಗಿಂದ ಎಬ್ಬಿಸಿದವರು ಯಾರು?
8. ಯೇಸು ಮಾಡಿದ ಮೊದಲನೆಯ ಸೂಚಕ ಕಾರ್ಯ ಯಾವದು?
9. ಪೇತ್ರನು ಯೊಪ್ಪದಲ್ಲಿ ಯಾರನ್ನು ಸತ್ತವರೊಳಗಿಂದ ಎಬ್ಬಿಸಿದನು?
10. ಯೇಸು ನೀರನ್ನು ದ್ರಾಕ್ಷಾರಸ ಮಾಡಿದ್ದು ಎಲ್ಲಿ?
11. ಯೇಸು ಲಾಜರನನ್ನು ಎಬ್ಬಿಸುವ ವರೆಗೆ ಅವನು ಸಮಾಧಿಯಲ್ಲಿ ಎಷ್ಟು ದಿನವಿದ್ದನು?
12. ತನಗೆ ಕಣ್ಣು ಬರುವಂತೆ ಮಾಡಬೇಕೆಂದು ಗಟ್ಟಿಯಾಗಿ ಕೂಗಿ ಯೇಸುವನ್ನು ಬೇಡಿಕೊಂಡವರು ಯಾರು?
13. ಯೇಸು ಕುರುಡನಿಗೆ ಯಾವ ಕೊಳದಲ್ಲಿ ತೊಳಕೊಳ್ಳಬೇಕೆಂದು ಹೇಳಿದನು
14. ನಾಲ್ಕೂ ಸುವಾರ್ತೆಗಳಲ್ಲಿ ಬರೆಯಲ್ಪಟ್ಟಿರುವ ಮಹತ್ಕಾರ್ಯ ಯಾವದು?
15. 4000 ಜನರಿಗೆ ಊಟ ಮಾಡಿಸಲು ಯೇಸು ಎಷ್ಟು ರೊಟ್ಟಿಗಳನ್ನು ಉಪಯೋಗಿಸಿದನು?
16. ಯೇಸು ಯಾವ ವಿಧವಾದ ರೋಗಗಳನ್ನು ವಾಸಿ ಮಾಡಿದನು?
17. ಆಶ್ಛರ್ಯಕರವಾದ ರೀತಿಯಲ್ಲಿ ತೆರಿಗೆ ಕಟ್ಟಲು ಯೇಸು ಯಾವ ಏರ್ಪಾಡು ಮಾಡಿದನು?
18. ಯೇಸು ಯಾವ ಸ್ಥಳದಲ್ಲಿ ಬಿರುಗಾಳಿಯನ್ನು ಶಾಂತಗೊಳಿಸಿದನು?
19. ಕಾನಾನ್ಯದವಳಾದ ಸ್ತ್ರೀಯ ಮಗಳಿಗೆ ಇದ್ದ ಯಾವ ಖಾಯಿಲೆಯನ್ನು ಯೇಸು ವಾಸಿ ಮಾಡಿದನು?
20. ಯೇಸು ಪೇತ್ರನ ಅತ್ತೆಯ ಯಾವ ಖಾಯಿಲೆಯನ್ನು ವಾಸಿ ಮಾಡಿದನು?
Result: