1. ತನ್ನ ಕತ್ತೆಯನ್ನು ಕೈಕೋಲಿನಿಂದ ಹೊಡೆದ ಮೇಲೆ ಯೆಹೋವನ ದೂತನ ಮುಂದೆ ತಾನು ಪಾಪ ಮಾಡಿದೆ ಎಂದು ಯಾರು ಅರಿಕೆ ಮಾಡಿದರು?
2. ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿ ಬಳಿದುಕೊಂಡು ಯೆಹೋವನಿಗೆ ಪಾಪವನ್ನರಿಕೆ ಮಾಡಿ ಬಿನ್ನವಿಸಿದ ಪ್ರವಾದಿ ಯಾರು?
3. ಬೆಳ್ಳಿ ಬಂಗಾರ ಉತ್ತಮವಾದ ನಿಲುವಂಗಿಯನ್ನು ಯುದ್ಧದ ಕೊಳ್ಳೆಯಲ್ಲಿ ಕದ್ದು ಆ ಮೇಲೆ ತನ್ನ ಕಳ್ಳತನವನ್ನು ಅರಿಕೆ ಮಾಡಿದ ಮೇಲೆ ಅವನನ್ನೂ ಮತ್ತು ಅವನ ಕುಟುಂಬದವರೆಲ್ಲರನ್ನೂ ಕಲ್ಲೆಸೆದು ಕೊಂದರು, ಆ ವ್ಯಕ್ತಿ ಯಾರು?
4. ಇವನು ದೇವಾಲಯದ ಮುಂದೆ ಅಡ್ಡಬಿದ್ದು ಅಳುತ್ತಾ ವಿಜ್ಞಾಪನೆಯನ್ನು, ಪಾಪ ನಿವೇದನೆಯನ್ನು ಮಾಡುತ್ತಿರುವಷ್ಟರಲ್ಲಿ ಇಸ್ರಾಯೇಲ್ಯರು ಕೂಡಿಬಂದು ಅಳುತ್ತಿದ್ದರು ಈ ವ್ಯಕ್ತಿ ಯಾರು?
5. ಸಜೀವವಾಗಿ ಹೋತವನ್ನು ತರಿಸಿ ಅದರ ತಲೆಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಇಸ್ರಾಯೇಲ್ಯರ ಎಲ್ಲಾ ಪಾಪಗಳನ್ನು ಯೇಹೋವನಿಗೆ ಅರಿಕೆ ಮಾಡಿದ ವ್ಯಕ್ತಿ ಯಾರು?
6. “ಹಾಗಾದರೆ ನೀನು ಯಾರು? ಎಲೀಯನೋ?” ಎಂದು ಯಾಜಕರು ಲೇವಿಯರು ಯಾರನ್ನು ಕೇಳಿದರು?
7. ವಿಷಭರಿತ ಸರ್ಪಗಳಿಂದ ಕಚ್ಚಲ್ಪಟ್ಟ ಅನೇಕರು ಸತ್ತು ಹೋದರು, ಆಗ ಇಸ್ರಾಯೇಲ್ಯರು ಯಾರ ಬಳಿಗೆ ಬಂದು ನಾವು ಪಾಪ ಮಾಡಿದ್ದೇವೆ ಎಂದು ಅರಿಕೆ ಮಾಡಿ ನಮಗಾಗಿ ಪ್ರಾರ್ಥಿಸು ಎಂದು ಬೇಡಿಕೊಂಡರು?
8. ಯಾವ ರಾಜನು ತನ್ನ ಪಾಪವನ್ನು ಒಬ್ಬ ಪ್ರವಾದಿಯ ಮುಂದೆ ಒಪ್ಪಿಕೊಂಡು ನಂತರ ಅವನ ಮೇಲಂಗಿಯ ಅಂಚನ್ನು ಹಿಡಿದೆಳೆದನು, ಆ ರಾಜನು ಯಾರು?
9. ಅರಸನಾದ ದಾವೀದನು ಯೋರ್ದನ್ ನದಿಯನ್ನು ದಾಟುತ್ತಿದ್ದಾಗ ತಾನು ಶಪಿಸಿ ಕಲ್ಲೆಸೆದದಕ್ಕಾಗಿ ಪಶ್ಚಾತ್ತಾಪ ಪಟ್ಟು ಕ್ಷಮಾಪಣೆ ಕೋರಿದನು? ಈ ವ್ಯಕ್ತಿ ಯಾರು?
10. ಅನೇಕ ಬಾಧೆಗಳು ತನ್ನ ದೇಶಕ್ಕೆ ಸಂಭವಿಸಿದ ಮೇಲೆ ಒಬ್ಬ ರಾಜನು ಮೋಶೆ ಮತ್ತು ಆರೋನರ ಮುಂದೆ ತಾನು ಅಪರಾಧಿ ಎಂದು ಒಪ್ಪಿಕೊಂಡನು, ಆ ರಾಜನು ಯಾರು?
Result: